ಕನ್ನಡ ನಾಡು | Kannada Naadu

ವೇಷ ಧರಿಸಿ ಸಂಗ್ರಹಿಸಿದ ಮೊತ್ತ `ಪರೋಪಕಾರಾಯ ಪುಣ್ಯಾಯ'  ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಣೆ...

29 Oct, 2024


ಉಡುಪಿ : ಟೀಂ ಯುವ ಟೈಗರ್ಸ್ ಮತ್ತು ಯುವ ಸೇವಾ ಸಂಘ ದುಗ್ಲಿಪದವು ಮಂಚಿ ಇವರ ಪರೋಪಕಾರಾಯ ಪುಣ್ಯಾಯ ಎಂಬ ಕಾರ್ಯಕ್ರಮದಡಿಯಲ್ಲಿ ಅಷ್ಟಮಿ ಹಾಗೂ ನವರಾತ್ರಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ವೇಳೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕ ಹರ್ಪಿತ್ ಚಿಕಿತ್ಸೆಗಾಗಿ ಹಾಗೂ ಇತರ ಮೂವರಿಗೆ ಸಂಗ್ರಹಿಸಿದ 2.42ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಚಂದ್ರಶೇಖರ್ ಶೇರಿಗಾರ್, ಕಸಾಪ ಉಡುಪಿ ಅಧ್ಯಕ್ಷ ರವಿರಾಜ್ ಎಚ್.ಪಿ., ಉದ್ಯಮಿ ಸುಭಾಷ್ ಎಂ.ಸಾಲ್ಯಾನ್, ಮಾಹೆಯ ಪ್ರಜಾಪತಿ, ಶಬರೀಶ್, ಸುಮತಿ ಶೇರಿಗಾರ್, ಶಾಂತರಾಮ ಶೆಟ್ಟಿ, ಡಾ.ಇಂದಿರಾ ಪೈ, ಸುಕನ್ಯಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by